ಬದುಕಿನಲ್ಲಿ ಕಳೆದುಕೊಂಡಿದ್ದನ್ನು ಮಾತ್ರ ಹುಡುಕಬೇಕಂತೆ .ಕಳೆದುಹೋಗದೇ ಹುಡುಕಹೊರಟ್ರೆ ಅದೊಂದು ಅತಿಶಯ . ಇರದುದರೆಡೆಗಿನ ತುಡಿತ .!!!ಆದರೆ ಪ್ರಸ್ತುತ ಕಳೆದುಕೊಳ್ಳದೇ ಪಡೆಯಲಾಗದ (!!)ನನ್ನೊಲವಿಗಾಗಿ ಹಂಬಲಿಸುತ್ತಿರುವೆ ; ನೆನಪುಗಳ ಬೆಚ್ಚನೆ ಹಾಸಿಗೆಯಲ್ಲಿ ಮಲಗಿ ಸುಂದರ ಕನಸುಗಳನ್ನು ಆಗ ತಾನೇ ಹೆಣೆದಿದ್ದೆ .ಕೊಟ್ಟಷ್ಟು ವಾಪಸ್ ಕೊಡಲೇ ಬೇಕೆನ್ನಲು 'ಪ್ರೀತಿ 'ಏನು ವ್ಯವಹಾರವಲ್ಲ . ಬಾಯ್ಬಿಟ್ಟು ಹೇಳದೇನೇ ಸಂಭಂದ ಒಂದಕ್ಕೆ ನಾಮಕರಣ ಮಾಡದೆ ,ಪರಿಶುದ್ದ ಮನಸ್ಸಿಗೊಂದು ತೇಪೆ ಹಚ್ಚಿ ಹೋದೆಯಲ್ಲ ...............,!ನಿನಗರಿವಿಲ್ಲದೆ ನನ್ನತ್ತ ವಾಲಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರೆ ಕ್ಷಮಿಸಲಾರೆನೆಂಬ ಭಯವೇ ?? ಮೌನವಾಗಿ ನನ್ನಿಂದ ಕಳೆದುಹೋಗುತ್ತಿರುವ ನಿನ್ನದು ಮಧುರ ಮೋಸವಾ ??! ಅಥವಾ ಪರಿಸ್ತಿತಿಯ ಅನಿವಾರ್ಯವಾ ??! ಉತ್ತರ ಹೊಳೆಯದ ಗೊಂದಲ ನನ್ನದು . ಇಷ್ಟು ಮಾತ್ರ ಹೇಳಬಲ್ಲೆ ,ಕೇಳು ,,,,, ಬದುಕು ಕವಲೊಡೆದ ಮಾತ್ರಕ್ಕೆ ಒಲವು ಕವಲೊಡಿದಿಲ್ಲ ,.! ಬದುಕಿನ ಒಲವು ಚೆಲ್ಲಲು ಮೂಡಿ ಬಂದ ಚಂದಿರ ನೀನು....... .ತಾರೆಗಳ ತೋಟವೇ ನಿನ್ನರಮನೆ ....., ನನ್ನೊಲವು ಕಳೆದಿಲ್ಲ .ಕಳೆದುಹೊದ್ದುದು ನೀನು !!ನಿನ್ನೊಲವು !!!ಈ ಒಲವಿಗೆ ಮಿಡಿಯದ ಹೃದಯದ ಉಪಯೋಗ ಏನು ?ಹೇಳು ... ಉತ್ತರಿಸಿ ಹೋಗು ನೀ ..........,,,;
ಭಾವಗಳ ಪ್ರಕಟಣೆ, ಬರೆಯುವ ಶೈಲಿ ಚೆನ್ನಾಗಿದೆ.. ಹೀಗೆ ಸಾಗಲಿ ಪಯಣ...
ReplyDeleteTHANKS FOR ALL OF UR SUPPORTS
ReplyDeleteಚೆಂದ ಇದ್ದು .. ನಿಮ್ಮ ಒಲವಿನ ಕೋರಿಕೆಗೆ ಬೇಗ ಉತ್ತರ ಸಿಗಲೆಂಬ ಹಾರೈಕೆ
ReplyDeleteಧನ್ಯವಾದಗಳು ಪ್ರಶಾಂತಿ "
ReplyDeleteಬ್ಲಾಗ್ ಗೆ ಬರ್ತಾ ,ತಪ್ಪನ್ನು ತಿಳಿಸ್ತಾ ಇರಿ
ಕವಲಿಲ್ಲದ ಒಲವು ....ಕವಲಿನ ಬದುಕು..ಒಲವಲ್ಲಿ ಬದುಕನ್ನು ಹುಡುಕು..ಇದುವೇ ಜೀವನ.ಸುಂದರವಾಗಿದೆ ನಿಮ್ಮ ಪದಗಳ ಜೋಡಣೆ..
ReplyDelete