Sunday, September 2, 2012

ಹೀಗೊಂದು ಮಾತು ,,




            ಈ ಬದುಕನ್ನೋದು ಮನಸ್ಸಿನ ಮೇಲಿನ ನಡಿಗೆ ನಂಬ್ತೀಯಾ?,ಏನು .......,ಇಂಥ ಒಂದು ಕಲ್ಪನೆ ಕೂಡ ಮಾಡಿರಲಾರೆ !
ಆದರೆ ನಾನು ಮಾತ್ರ ಈ ಮನಸ್ಸು ಹೋದತ್ತಲೇ ಹೋಗೋ ಹುಟ್ಟಿಲ್ಲದ ದೋಣಿ ಅಂತಾಗಿದ್ದೇನೆ .ನಿಜ !..ನಿನ್ನೆ ಮೊನ್ನೆಯ ತನಕ ಹೀಗಿರಲಿಲ್ಲ .ಎಲ್ಲಾ ವಿಚಾರದಲ್ಲೂ ನನ್ನದೇ ಆದ ನಿಲುವೊಂದಿತ್ತು !.ಯಾವ ಗೊಂದಲವೂ ಇರಲಿಲ್ಲ ..
                      ಆದರೀಗ ನನಗೆ ನಾನೇ ಒಂದು ಒಗಟಾಗಿ ಬಿಟ್ಟಿದ್ದಿನಿ !   ಹಾಗೆ ನೋಡಿದರೆ ಇತ್ತೀಚಿನವರೆಗೂ ನನಗೆ ನಿನ್ನ ಮೇಲೆ ಯಾವ ಭಾವನೆಯೂ ಇರಲಿಲ್ಲ ,ಎಲ್ಲರಂತೆ ನೀನಿದ್ದೆ .ಎಲ್ಲರೊಡನೆ ನಾನಿದ್ದೆ !!ಆದರೆ ಈಗ ನನ್ನ ಮನಸ್ಸಿಗೆ ಮಾತ್ರ ನೀನು ಎಲ್ಲರಂತಿಲ್ಲ ,,,,ಎಲ್ಲೋ ಇರಬೇಕಿದ್ದ ನೀನು ನನ್ನೊಳಗೆ ಬಂದು ಬಿಟ್ಟಿದ್ದಿ,,
ನವಿರು ಭಾವಗಳನ್ನು ಪ್ರತಿಫಲಿಸಬೇಕಾಗಿದ್ದ ನಿನ್ನ ಕಂಗಳಲ್ಲಿ ಅದೇಕೆ ಅಂತ ದಿವ್ಯ ನಿರ್ಲಕ್ಷವೋ ನಾ ಕಾಣೆ !ನನ್ನ ಮನ ನಿನ್ನ ಸುತ್ತಲೇ ತಿರುಗುತ್ತಿರಬೇಕಾದರೆ ನನಗೇನಾದರೂ  ಇನ್ನೇನು ಕೆಲಸ .?ನೀ ಹೋದೆಡೆ ಬರೋ ನಿನ್ನ ನೆರಳು ನಾನು ,,,,,ನಿನ್ನದೇ ನೆರಳನ್ನು AVOID ಮಾಡೋದು ನಿನ್ನಿಂದ ಸಾಧ್ಯನಾ ??,,,
ಯೋಚಿಸಿ ನೋಡು ........
           ಹೀಗೊಂದು ಮಧುರ ರವಾನೆ ....ಸಾಧ್ಯವಾದರೆ ಉತ್ತರಿಸು ...
ನಿನ್ನವ .

6 comments:

  1. ಜೀವನ ಮನಸ್ಸಿನ ಮೇಲಿನ ನಡಿಗೆ...
    ನಿನ್ನ ನೆರಳಿಂದ ತಪ್ಪಿಸಿಕೊಳ್ಳೋದು ಸಾಧ್ಯವಾ..?
    ಕಲ್ಪನೆ... ಭಾವನೆ.. ಚೆನ್ನಾಗಿದೆ...

    ReplyDelete
  2. ಧನ್ಯವಾದಗಳು ..ಬ್ಲಾಗ್ ಗೆ ಬರ್ತಾ ಇರಿ ,,

    ReplyDelete
  3. nice one :)

    i hope u might like my writings too

    at

    http://www.pallakki.blogspot.in/

    ReplyDelete
  4. ya i liked ...
    keep going ..nice work

    ReplyDelete
  5. ಸುಂದರ ಸುಮಧುರ..ಮಧುರ ಮಧುರ..ಮಧುರ..ಈ ಸಂಭಾಷಣೆ..ಸುಂದರ ಅತಿ ಸುಂದರ...

    ReplyDelete