Tuesday, September 4, 2012

ಆಹ್ವಾನವೀಯಲಿಲ್ಲ ನಿನಗೆ
ನನ್ನ ಕಣ್ಣ ಮುಂದೆ ಬಾ ಎಂದು ,
ಸುಳಿ ಮಿಂಚೊಂದ ಮೂಡಿಸಿ ತೇಲಿಸೆಂದು
ಆದರೂ ಬಂದೆ ನೀನು ,,,,

ಬೇಡಲಿಲ್ಲ ನಿನ್ನ
ಮನದೊಳಗೆ ನಿಂತು
ನನ್ನ ಅರಳಿಸೆಂದು ,
ನೂರು ಕನಸ ಮೂಡಿಸಿ ಮೈ ಮರೆಸೆಂದು .!
ಈಗ ...

 
ನನ್ನ ನಾ ಕಳೆವ ಹೊತ್ತು
ನೀನಿರದ ಜಗವೇ ನನಗೆ ಬೇಕಿರಲಿಲ್ಲ ,,
ಆದರೂ ಹೊರಟೆ ನೀ
ನನಗೆ ಬೆನ್ನು ಮಾಡಿ !!

4 comments:

  1. ಬೆನ್ನು ಮಾಡಿ ಹೋದವರು ಬೇಗ ಮರಳಿ ಬರಲಿ.. ಕವನ ಚೆನ್ನಾಗಿದೆ..

    ReplyDelete
  2. ನಿಮ್ಮ ಬ್ಲಾಗಿನಲ್ಲಿರುವ ಎಲ್ಲಾ ಲೇಖನಗಳು ಚನ್ನಾಗಿವೆ, ಈ ಕವನ ತುಂಬಾ ಇಷ್ಟವಾಯಿತು, ಹೀಗೆ ಲೇಖನಗಳು ಮೂಡಿಬರುತ್ತಿರಲಿ...

    ReplyDelete


  3. ದಿಲೀಪ್ ಅಣ್ಣಾ ,,,

    ಇದೊಂದು ಕಲ್ಪನೆ ಅಷ್ಟೇ ....ಆಹ್ವಾನ ಇಲ್ಲದೆ ಬಂದು ,ಮನಸ್ಸಿನಲ್ಲಿ ಮನೆ ಮಾಡಿ ಆಮೇಲೆ ಏನೂ ಅರಿಯದವರ ತರ ಹೊರಟುಹೋಗುವವರಿಗೆ ಹೀಗೊಂದು ಮಾತು .

    ಮನಸ್ವಿ @..ಧನ್ಯವಾದಗಳು ..

    ಬ್ಲಾಗ್ ಗೆ ಬರುತ್ತಿರಿ .

    ReplyDelete

  4. ಅಭ್ಯಾಗತರ, ಅಜ್ಞಾತ ಭಾವಗಳು ಯಾವಾಗಲು ಹೀಗೆಯೇ ತಡಕಾಡುತ್ತವೆ.ತದಬಡಾಯಿಸುತ್ತವೆ.. ತೊಳಲಾಟ ತರುವ ಪದಗಳು, ಭಾವಗಳು ಸುಂದರವಾಗಿ ಮೂಡುತ್ತಿವೆ.

    ReplyDelete