ಆಹ್ವಾನವೀಯಲಿಲ್ಲ ನಿನಗೆ
ನನ್ನ ಕಣ್ಣ ಮುಂದೆ ಬಾ ಎಂದು ,
ಸುಳಿ ಮಿಂಚೊಂದ ಮೂಡಿಸಿ ತೇಲಿಸೆಂದು
ಆದರೂ ಬಂದೆ ನೀನು ,,,,
ಬೇಡಲಿಲ್ಲ ನಿನ್ನ
ಮನದೊಳಗೆ ನಿಂತು
ನನ್ನ ಅರಳಿಸೆಂದು ,
ನೂರು ಕನಸ ಮೂಡಿಸಿ ಮೈ ಮರೆಸೆಂದು .!
ಈಗ ...
ನನ್ನ ನಾ ಕಳೆವ ಹೊತ್ತು
ನೀನಿರದ ಜಗವೇ ನನಗೆ ಬೇಕಿರಲಿಲ್ಲ ,,
ಆದರೂ ಹೊರಟೆ ನೀ
ನನಗೆ ಬೆನ್ನು ಮಾಡಿ !!
ಬೆನ್ನು ಮಾಡಿ ಹೋದವರು ಬೇಗ ಮರಳಿ ಬರಲಿ.. ಕವನ ಚೆನ್ನಾಗಿದೆ..
ReplyDeleteನಿಮ್ಮ ಬ್ಲಾಗಿನಲ್ಲಿರುವ ಎಲ್ಲಾ ಲೇಖನಗಳು ಚನ್ನಾಗಿವೆ, ಈ ಕವನ ತುಂಬಾ ಇಷ್ಟವಾಯಿತು, ಹೀಗೆ ಲೇಖನಗಳು ಮೂಡಿಬರುತ್ತಿರಲಿ...
ReplyDelete
ReplyDeleteದಿಲೀಪ್ ಅಣ್ಣಾ ,,,
ಇದೊಂದು ಕಲ್ಪನೆ ಅಷ್ಟೇ ....ಆಹ್ವಾನ ಇಲ್ಲದೆ ಬಂದು ,ಮನಸ್ಸಿನಲ್ಲಿ ಮನೆ ಮಾಡಿ ಆಮೇಲೆ ಏನೂ ಅರಿಯದವರ ತರ ಹೊರಟುಹೋಗುವವರಿಗೆ ಹೀಗೊಂದು ಮಾತು .
ಮನಸ್ವಿ @..ಧನ್ಯವಾದಗಳು ..
ಬ್ಲಾಗ್ ಗೆ ಬರುತ್ತಿರಿ .
ReplyDeleteಅಭ್ಯಾಗತರ, ಅಜ್ಞಾತ ಭಾವಗಳು ಯಾವಾಗಲು ಹೀಗೆಯೇ ತಡಕಾಡುತ್ತವೆ.ತದಬಡಾಯಿಸುತ್ತವೆ.. ತೊಳಲಾಟ ತರುವ ಪದಗಳು, ಭಾವಗಳು ಸುಂದರವಾಗಿ ಮೂಡುತ್ತಿವೆ.